ದೃಶ್ಯಕ್ಕೊಂದು ನುಡಿಗಟ್ಟು

ಕಾಸರವಳ್ಳಿ ಕುಟುಂಬ ಈ ದು:ಖದ ಘಳಿಗೆಯಲ್ಲಿ ಧೈರ್ಯ ತಾಳಲಿ

vaishali kasaravalliನಟಿ, ನಿರ್ದೇಶಕಿ- ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರ ಪತ್ನಿ ವೈಶಾಲಿ ಕಾಸರವಳ್ಳಿಯವರು ಇಂದು ನಿಧನರಾದರು.  

ಕಳೆದ ಹಲವು ದಿನಗಳಿಂದ ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದ ಅವರು ಕೋಮಾವಸ್ಥೆ ತಲುಪಿದ್ದರು. ವಾರದ ಹಿಂದೆ ಕಾರ್ಯಕ್ರಮವೊಂದಕ್ಕೆ ಆಹ್ವಾನಿಸಲೆಂದು ಗಿರೀಶ್ ಅವರಿಗೆ ಕರೆ ಮಾಡಿದಾಗ ಕೇಳಿದ್ದು ಅವರ ದುಃಖಪೂರಿತ ಆರ್ದ್ರ ಧ್ವನಿ. ಮುಂದೆ ಹೆಚ್ಚು ಮಾತನಾಡಲಾಗದೆ ಫೋನ್ ಕಟ್ ಮಾಡಿದ್ದರು. ಕಳೆದ ಮೂರು ವರ್ಷಗಳಿಂದ ಕಾಸರವಳ್ಳಿ ಮನೆಯ ಬಳಿ ವಾಸಿಸುತ್ತಿರುವ ಕಾರಣ ಅವರ ಮನೆ, ಜನ ಇತ್ಯಾದಿ ನಮ್ಮ ಗಮನಕ್ಕೆ ಬೀಳುತ್ತಿದ್ದುದು ಆಕಸ್ಮಿಕವೇನಲ್ಲ. ಅವರ ಮನೆ ಮುಂದಿನ ಟೀ ಅಂಗಡಿ ನಮಗೆ ಮರಮಾಪ್ತ ಜಾಗ. ಇರಲಿ

ವೈಶಾಲಿಯವರನ್ನು ನಟಿಯಾಗಿ ನೆನೆಪಿಸಿಕೊಳ್ಳಲು ಇರುವ ಗಾಢ ನೆನಪೆಂದರೆ ಮಣಿರತ್ನಂ ನಿರ್ದೇಶನದ ಅನಿಲ್ ಕಪೂರ್ ಮೊದಲ ಬಾರಿಗೆ ನಾಯಕನಾಗಿದ್ದ ’ಪಲ್ಲವಿ ಅನುಪಲ್ಲವಿ’ ಚಿತ್ರ ಮತ್ತು ’ನಗುವ ನಯನ ಮಧುರ ಮೌನ’ ಎಂಬ ಅಮರ ಗೀತೆ.

ಇತ್ತೀಚಿನ ದಿನಗಳಲ್ಲಿ ಟಿ ವಿ ಸೀರಿಯಲ್‌ಗಳ ನಿರ್ದೇಶನದಲ್ಲಿ ತೊಡಗಿಕೊಂಡಿದ್ದ ವೈಶಾಲಿಯವರು, ’ಮೂಡಲ ಮನೆ’ ರೀತಿಯ ಧಾರಾವಾಹಿಯ ಮೂಲಕ ಕಿರುತೆರೆಯ ಸಾಧ್ಯತೆಗಳಿಗೆ ಹೊಸ ವ್ಯಾಖ್ಯಾನ ನೀಡಿದ್ದರು. ತಮ್ಮ ಅನಾರೋಗ್ಯದ ಕಾರಣದಿಂದಾಗಿ ’ಮುತ್ತಿನ ತೋರಣ’ ಧಾರವಾಹಿಯ ನಿರ್ದೇಶನದ ಹೊಣೆಯನ್ನು ಮಗ ಅಪೂರ್ವನ ಹೆಗಲಿಗೆ ಹಾಕಿದ್ದರು.

ಬಹುಷಃ ಸುದೀಪ್ ನಿರ್ದೇಶನದ ’ನಂ-73, ಶಾಂತಿ ನಿವಾಸ’ ಪೋಷಕನಟಿಯಾಗಿ ಅವರ ಕೊನೆ ಚಿತ್ರ.

ಕಾಸರವಳ್ಳಿ ಕುಟುಂಬ ಈ ದು:ಖದ ಘಳಿಗೆಯಲ್ಲಿ ಧೈರ್ಯ ತಾಳಲಿ.

ಅವರ ಮನೆ "kasaravallis"  ಮತ್ತೆ ಮೊದಲಿನಂತಾಗಲಿ.

ವಿಶೇಷ ಸೂಚನೆ: ಅಕ್ಟೋಬರ್ ೧೭ರಂದು ಆಯೋಜಿಸಲಾಗಿದ್ದ ’ಕನಸೆಂಬ ಕುದುರೆಯನೇರಿ’ ಚಿತ್ರದ ಪ್ರದರ್ಶನ ಮತ್ತು ಸಂವಾದವನ್ನು ರದ್ದುಗೊಳಿಸಲಾಗಿದೆ.

27-09-2010


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು