ನನ್ನ ಚಿತ್ರದ ಬಗ್ಗೆ ನಾನೂ ನೋಡದ ಆಯಾಮಗಳು ಗೋಚರಿಸಿದವು - ಗಿರಿರಾಜ್
ಮೊದಲನೆಯದಾಗಿ, ಈ ಸಲದ ಚಿತ್ರ ಪ್ರದರ್ಶನಕ್ಕೆ ಬಂದಂತವರ ಸಂಖ್ಯೆ ನನ್ನ ಹಿಂದಿನ ಚಿತ್ರ ಪ್ರದರ್ಶನಕ್ಕೆ ಬಂದಂತಹ ಜನರ ಸಂಖ್ಯೆಗಿಂತ ಅಧಿಕವಾಗಿತ್ತು. ಇದು ಸಂವಾದ ಡಾಟ್ ಕಾಂನವರ ಸಂಘಟನೆಯ ಫಲ. ನನ್ನ ಚಿತ್ರವನ್ನು ಸಂಪೂರ್ಣ ಭಿನ್ನ ಚಿತ್ರವೆಂದು ಮಾರ್ಕೆಟಿಂಗ್ ಮಾಡಿ, ಬಿಜಾಪುರ, ರಾಯಚೂರಿನಂತಹ ದೂರದ ಜಾಗಗಳಿಂದ ಜನರು ಬರುವಂತೆ ಮಾಡಿದ್ದರು. 'ಸಂವಾದ’ದ ಚರ್ಚೆಯ ವಿಷಯವಾಗಿ ಹೇಳುವುದಾದರೆ, ಶ್ರೀ ಶೇಖರಪೂರ್ಣರ ವಿದ್ವತ್ಪೂರ್ಣ ವಿಶ್ಲೇಷಣೆ ನೋಡುಗರಿಗೆ ನೋಡಿದ ಚಿತ್ರವನ್ನು ಇನ್ನೂ ಭಿನ್ನ ನೆಲಗಟ್ಟಲ್ಲಿ ನೋಡಲು ಪ್ರೇರೇಪಿಸಿತು. ನಾನೂ ನೋಡದ ಎಷ್ಟೋ ಆಯಾಮಗಳು ನನಗೆ ಗೋಚರಿಸಿದವು ಅತಿಥಿಗಳಾಗಿ ಬಂದಿದ್ದಂತಹ ಶ್ರೀ ಸುಚೇಂದ್ರ ಪ್ರಸಾದರ ಮಾತುಗಳು ನನಗೆ ಅರ್ಥವಾಗಿಲ್ಲ. ಪ್ರೇಕ್ಷಕರ ವರ್ಗದವರು ನಡೆಸಿದ ಸಂವಾದ ಅವರು ಸಿನಿಮಾವನ್ನು ಮುಖ್ಯವಾಗಿ, ಇದು ಸಂಘಟಕರ ಸಂಘಟನಾ ಕೌಶಲದ ಸಾಕ್ಷಿಯಾಗಿ ಅದು ನನ್ನ ಸಿನಿಮಾದಿಂದಾಯಿತು ಎನ್ನುವುದರ ಬಗ್ಗೆ ನನಗೆ ಅದಮ್ಯ ಸಂತಸವಿದೆ. ನನ್ನ ಸಿನಿಮಾವನ್ನು ಮತ್ತೊಮ್ಮೆ ಪ್ರದರ್ಶನ ಹಾಗು ಸಂವಾದದ ಮೂಲಕ ಒರೆಗೆ ಹಚ್ಚಬೇಕಾಗಿ ವಿನಂತಿ. -ಗಿರಿರಾಜ್ ಬಿ ಎಂ, `ನವಿಲಾದವರು’ ಚಿತ್ರದ ನಿರ್ದೇಶಕರು 07-10-2010
|
|