ಗಮನಿಸಿ: ಕೆ ಎಚ್ ಕಲಾಸೌಧದಲ್ಲಿ ಎರಡು ನಾಟಕಗಳ ಪ್ರಯೋಗ 24, 25 ರಂದು
"ನಿಮ್ಮೊಳಗಿನ ನಮ್ಮನು" ಗುರುತಿಸುವ ಗುರಿಯೊಂದಿಗೆ ಈವರೆಗೂ ಅನೇಕ ಪ್ರದರ್ಶನಗಳನ್ನ ನೀಡಿರುವ "ರಂಗ ತಂತ್ರ" ನಾಟಕ ತಂಡವು ಈ ಬಾರಿ ಇದೇ ಸೆಪ್ಟೆಂಬರ್ ತಿಂಗಳ ೨೪ ಹಾಗೂ ೨೫ ರಂದು ಹಾಸ್ಯನಾಟಕೋತ್ಸವವನ್ನು ಆಯೋಜಿಸಿದೆ. ೨೪ ನೇ ಸೆಪ್ಟೆಂಬರ್:ಎಮ್ ಎಸ್ ನರಸಿಂಹಮೂರ್ತಿ ವಿರಚಿತ "ಲಾಕ್ ಔಟ್ ಅಲ್ಲ ನಾಕ್ ಔಟ್" ನಾಟಕ ಪ್ರದರ್ಶನ. ಈ ನಾಟಕವು, ಒಂದು ಮದ್ಯಮವರ್ಗದ ಕೌಟುಂಬಿಕ ಚಿತ್ರಣವನ್ನು ನೀದುತ್ತದೆ. ಗಂಡ-ಹೆಂಡತಿ ಇಬ್ಬರು ದುಡಿಯುವ ಮನೆಯಲ್ಲಿ,ಗಂಡನ ಫ್ಯಾಕ್ಟರೀ ಲಾಕ್ ಔಟ್ ಆದಾಗ ,ಆತನಿಗಿಂತ ಒಳ್ಳೆಯ ಹುದ್ದೆಯಲ್ಲಿರುವ ಹೆಂಡತಿಯಿಂದ ಹೇಗೆ ಶೋಷಣೆಗೆ ಒಳಗಾಗುತ್ತಾನೆ ಎಂಬುದರ ಚಿತ್ರಣವನ್ನು ಹಾಸ್ಯಾತ್ಮಕ ರೂಪದಲ್ಲಿ ತೋರಿಸಲಾಗಿದೆ. ೨೫ನೇ ಸೆಪ್ಟೆಂಬರ್:'ಪ್ರಹಸನ ಪ್ರಪಿತಾಮಹ' - ಟಿ ಪಿ ಕೈಲಾಸಂ ರವರ ಸುಪ್ರಸಿದ್ದ "ಬಂಡ್ವಾಳ್ವಿಲ್ಲದ ಬಡಾಯಿ" ನಾಟಕ ಪ್ರದರ್ಶನ. ಈ ನಾಟಕವು, ಒಬ್ಬ ವಕೀಲನ ನಿತ್ಯ ಜೀವನದ ಆಗುಹೋಗುಗಳು, ಆತನ ತಂತ್ರಗಳಿಗೆ ಬಲಿಯಾಗುವ ಆತನ ಜೂನಿಯರ್ ಹಾಗೂ ಕಕ್ಷಿಗಾರರುಗಳು, ಸ್ನೇಹಿತರೆದುರು ಕೊಚ್ಚಿಕೊಳ್ಳುವ ಬಡಾಯಿಗಳನ್ನ ಹಾಸ್ಯಾತ್ಮಕವಾಗಿ ಪ್ರಸ್ತುತ ಪಡಿಸಲಿದೆ. ಸ್ಥಳ: ಕೆ ಹೆಚ್ ಕಲಾಸೌಧ, ರಾಮಾಂಜನೇಯ ದೇವಸ್ಥಾನದ ಆವರಣ, ಹನುಮಂತ ನಗರ, ಬೆಂಗಳೂರು - ೫೬೦೦೧೯. ಸಮಯ: ಸಂಜೆ 7:3೦. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: ಸಂಗಮೇಶ್ (9449795282) Online ticket booking: @ http://www.indianstage.in
16-09-2001
|
|