ಕರ್ನಾಟಕ ಕಂಡ ಒಳ್ಳೆಯ ಗಾಯಕ, ಸಂಗೀತ ಸಂಯೋಜಕ, ನಟ ಹೀಗೆ ಬಹುಮುಖ ಪ್ರತಿಭೆಯಾಗಿದ್ದ ‘ರಾಜು ಅನಂತಸ್ವಾಮಿ’ ಕೇವಲ ಹೆಸರಲ್ಲ, ಒಂದು ಅನುಭವ; ನೆನಪಿಗೆ ಮೀರಿದ ಅನುಭವ.
ರಾಜು ಅನಂತಸ್ವಾಮಿ ನಮಗಾಗಿ ಹಾಡಿದ ಹಾಗು ಅವರು ಇಷ್ಟಪಟ್ಟು ಹಾಡುತ್ತಿದ್ದ ಹಾಡುಗಳ ಮೂಲಕ ಅವರನ್ನು ನೆನೆಯುವ ಸಲುವಾಗಿ ಕಲೆ ತಂಡ ಹಲವು ಗೆಳೆಯರೊಂದಿಗೆ ಸೇರಿ ‘ನೆನಪಿಗೆ ಮೀರಿದ್ದು’ ಕಾರ್ಯಕ್ರಮವನ್ನು ಆಯೋಜಿಸಿದೆ.
ಈ ಕಾರ್ಯಕ್ರಮದಲ್ಲಿ ರಾಜು ಅನಂತಸ್ವಾಮಿಯವರ ಕೆಲವು ಶಿಷ್ಯರು, ಆಪ್ತ ಕಲಾವಿದರು ಹಾಡಲಿದ್ದು, ಇದಕ್ಕೆ ಜೊತೆಯಾಗಿ ಅವರ ಜೊತೆಗೆ ವಾದ್ಯಗಳನ್ನು ನುಡಿಸುತ್ತಿದ್ದ ಹಿರಿಯ ಕಲಾವಿದರು ಭಾಗವಹಿಸಲಿದ್ದಾರೆ.
ದಿನಾಂಕ: ೧೭ ಜನವರಿ ೨೦೧೨
ಸ್ಥಳ:
ಕೆ.ಎಚ್.ಕಲಾಸೌಧ
ರಾಮಾಂಜನೇಯ ಗುಡ್ಡ
ಹನುಮಂತನಗರ
ಬೆಂಗಳೂರು
ಸಮಯ: ಸಂಜೆ ೭:೩೦ ರಿಂದ
ಪ್ರಸ್ತುತಿ: ಕಲೆ ತಂಡ ಹಾಗು ಗೆಳೆಯರು
ಹಾಡಿನಲ್ಲಿ:
ಸುಜಯ್ ಶಾಸ್ತ್ರಿ,
ಪ್ರದೀಪ್ ಬಿ ವಿ,
ಸ್ಮಿತಾ ವಸಂತ್
ಮಧುಮಾಲ
ಪ್ರವೀಣ್ ಬಿ ವಿ ಹಾಗು
ರಾಜು ಅನಂತಸ್ವಾಮಿಯವರೊಂದಿಗೆ ಹಾಡಿರುವ, ಅವರ ಬಳಿ ಕಲಿತಿರುವ ಅತಿಥಿ ಗಾಯಕರು.
ವಾದ್ಯ:
- ಗಿಟಾರ್: ಸುದರ್ಶನ್
- ರಿದಂ ಪ್ಯಾಡ್ : ಜೆರಾಲ್ಡ್
- ಕೀಬೋರ್ಡ್ : ಕೃಷ್ಣ ಉಡುಪ
- ತಬಲ: ಎಂ.ಸಿ.ಶ್ರೀನಿವಾಸ್
- ಕೊಳಲು: ವಸಂತ್
ಆಹ್ವಾನಿತರು:
ಈ ಕಾರ್ಯಕ್ರಮಕ್ಕೆ ರಾಜು ಅನಂತಸ್ವಾಮಿಯವರ ಒಡನಾಟದಲ್ಲಿದ್ದ ಹಲವು ಗೆಳೆಯರನ್ನು ಆಹ್ವಾನಿಸಲಾಗಿದೆ. ಅವರು ರಾಜು ಅನಂತಸ್ವಾಮಿಯವರ ಜೊತೆಗಿನ ಅನುಭವವನ್ನು ಹಂಚಿಕೊಳ್ಳಲಿದ್ದಾರೆ.
ಕಾರ್ಯಕ್ರಮ ಸಹಯೋಗ: ಲಹರಿ ಆಡಿಯೋ ಸಂಸ್ಥೆ ಹಾಗು ಸಂವಾದ ಡಾಟ್ ಕಾಂ(samvaada.com)
ಹೆಚ್ಚಿನ ವಿವರಗಳಿಗೆ ವಿನಯ್ ಶೇಷಾದ್ರಿ(ಕಲೆ ತಂಡದ ನಿರ್ದೇಶಕ)ಯನ್ನು ೯೮೮೬೦ ೮೪೧೧೧ ಸಂಖ್ಯೆಯಲ್ಲಿ ಸಂಪರ್ಕಿಸಬಹುದಾಗಿದೆ.
14-01-2012
