ಕ್ರಿಯಾ ಸಮಿತಿಯಿಂದ ಕೆಲಸಕ್ಕೆ ಬಾರದ ನಿರ್ಣಯಗಳುಕೆಲವು ದಿನಗಳ ಹಿಂದೆ ನಡೆದ ನಿರ್ದೇಶಕರ, ತಂತ್ರಜ್ಞರ ಕ್ರಿಯಾ ಸಮಿತಿ ಸಭೆಯಲ್ಲಿ ಈ ಕೆಳಗಿನ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ ಎಂಬ ವರದಿ ಬಂದಿದೆ: ೧. ಚಿತ್ರ ನಿರ್ದೇಶಕನಾಗುವ ಅರ್ಹತೆ ಪಡೆಯಲು ಕನಿಷ್ಟ ೫ ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರಬೇಕು.
ನಿರ್ದೇಶಕನಾದವನು ೫ ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಬೇಕೆಂದರೆ , ಚಿತ್ರರಂಗಕ್ಕೆ ಬಂದ ೮-೧೦ ವರ್ಷ ಅದರಲ್ಲೇ ಕಳೆದು ಹೋಗುತ್ತದೆ. ಅಷ್ಟಕ್ಕೂ ನಿರ್ಮಾಪಕನಿಗೆ ನಿರ್ದೇಶಕನ ಮೇಲೆ ವಿಶ್ವಾಸವಿದ್ದರೆ, ಈ ಅನುಭವವನ್ನ ಕಟ್ಟಿಕೊಂಡು ಯಾರಿಗೇನಾಗಬೇಕು. ಇಂದಿಗೂ ಕನ್ನಡದ ಕ್ಲಾಸಿಕ್ ಎಂದೆನಿಸಿಕೊಂಡಿರುವ ಘಟಶ್ರಾದ್ಧ ಮಾಡಿದ ಗಿರೀಶ್ ಕಾಸರವಳ್ಳಿಗೆ ಐದು ಚಿತ್ರಕ್ಕೆ ಸಹಾಯಕರಾಗಿ ಕೆಲಸ ಮಾಡಿದ ಅನುಭವವೇನೂ ಇರಲಿಲ್ಲ. ನಿರ್ದೇಶಕರ ಸಂಘದ ಸದಸ್ಯತ್ವ ಕಡ್ಡಾಯ ಮಾಡುವ ಮೊದಲು ಆ ಸಂಘ ಕನ್ನಡ ಚಿತ್ರರಂಗಕ್ಕೆ ಏನು ಕೊಡುಗೆ ನೀಡುತ್ತಿದೆ ಎಂದು ಆಲೋಚಿಸಬೇಕು. ಸುಮ್ಮನೇ ವರ್ಷಕ್ಕೊಂದು ಸಭೆ ಸೇರಿ ಭಾಷಣ ಬಿಗಿದು ಬಿಟ್ಟರೆ ಎನೂ ಆಗುವುದಿಲ್ಲ. ಇನ್ನು ಮೊಬೈಲ್ ಬಳಸಬಾರದು, ೪೫ ಅಡಿಗಿಂತ ಹೆಚ್ಚು ರೀಲು ಸುತ್ತಬಾರದು, ಹೊರಗಿನ ತಂತ್ರಜ್ಞರನ್ನು ಕರೆಸಬಾರದು ಎಂದೆನ್ನುವುದೆಲ್ಲ ಬಾಲಿಶ ನಿರ್ಣಯಗಳು. ಇಂತಹ ಕೆಲಸಕ್ಕೆ ಬಾರದ ರೂಲ್ಸು ಮಾಡುವುದು ಬಿಟ್ಟು ನಿರ್ದೇಶಕ, ನಿರ್ಮಾಪಕರ ಸಂಘ ಈ ಕೆಳಗಿನ ಸಲಹೆಗಳ ಮೇಲೆ ಗಮನ ಹರಿಸಿದರೆ, ಏನಾದರೂ ಉಪಯೋಗವಾದೀತು. ೧. ನಟರಿಗೆ ದುಬಾರಿ ಸಂಭಾವನೆ ನೀಡದಿರುವುದು. ಸಂವಾದ ತಂಡ ಡಿಸೆಂಬರ್ ೪, ೨೦೦೯, ಶುಕ್ರವಾರ
|
|