ದೃಶ್ಯಕ್ಕೊಂದು ನುಡಿಗಟ್ಟು

'ಸಿನೆಮ ಓದೋಣ ಬನ್ನಿ' - ವರದಿ

cinema reading camp report nandi farm, chaitanya karahalli, nagabharana T S, Vasudhendra, chanda pustaka, samvaada.comಕಳೆದ ವಾರ ತುಮಕೂರಿನ ನಂದಿ ಫಾರ್ಮಿನಲ್ಲಿ ಎರಡು ದಿನಗಳ 'ಸಿನೆಮ ಓದೋಣ ಬನ್ನಿ' ಶಿಬಿರ ಜರುಗಿತು. ಸಂವಾದ ಡಾಟ್ ಕಾಮ್ ಆಯೋಜಿಸಿದ್ದ ಈ ಶಿಬಿರದಲ್ಲಿ 50 ಅಭ್ಯರ್ಥಿಗಳು ಭಾಗವಹಿಸಿದ್ದರು. ಬೆಂಗಳೂರು, ತುಮಕೂರುಗಳಲ್ಲದೆ ಕುಂದಾಪುರ, ಮಂಗಳೂರುಗಳಿಂದ ಆಸಕ್ತರು ಆಗಮಿಸಿದ್ದು ವಿಶೇಷವಾಗಿತ್ತು. ಕನ್ನಡ ಸಿನೆಮಾಗಳನ್ನು ನೋಡುವ ಪ್ರೇಕ್ಷಕರ ಸಂಖ್ಯೆ ಹೆಚ್ಚಿಲ್ಲ ಎನ್ನುವ ಕಳವಳವಿದೆ. ಆದರೆ ಇದಕ್ಕಿಂತಲೂ ಹೆಚ್ಚು ಚಿಂತೆಗೀಡು ಮಾಡುವ ಸಂಗತಿಯೆಂದರೆ ಇರುವ ಪ್ರೇಕ್ಷಕರಲ್ಲಿ ದೃಶ್ಯ ಸಾಕ್ಷರತೆ (visual literacy) ಹೊಂದಿರುವವರು ತೀರಾ ವಿರಳ. ದಿನನಿತ್ಯ ಧಾರಾವಾಹಿ, ಸಿನೆಮಾ, ಜಾಹೀರಾತು, ವಾರ್ತೆ, ರಿಯಾಲಿಟಿ ಶೋಗಳ ರೂಪದಲ್ಲಿ ಟಿವಿ, ಸಿನೆಮಾ ಪರದೆ, ಕಂಪ್ಯೂಟರ್ , ಮೊಬೈಲುಗಳ ಮೂಲಕ ಹರಿದು ಬರುತ್ತಿರುವ ದೃಶ್ಯಾವಳಿಗಳನ್ನು ಸಂವೇದನಾಶೀಲವಾಗಿ ಗ್ರಹಿಸುವ ತರಬೇತಿ ಈ ಕಾಲದ ತುರ್ತು. ಇಂತಹ ತರಬೇತಿಗೆ ಅಗತ್ಯವಾದ ವೇದಿಕೆ ಒದಗಿಸುವಲ್ಲಿ ಸಂವಾದ ಡಾಟ್ ಕಾಮ್ ಆಯೋಜಿಸಿದ್ದ ಶಿಬಿರ ಎಷ್ಟರ ಮಟ್ಟಿಗೆ ಉಪಯುಕ್ತವಾಯಿತು ಎಂದು ಅವಲೋಕಿಸುವ ಪ್ರಯತ್ನ ಈ ಬರಹದ್ದು.

 ಶಿಬಿರದಲ್ಲಿ ಭಾಗವಹಿಸಿದ ಕೆಲ ಅಭ್ಯರ್ಥಿಗಳಿಗೆ ಶಿಬಿರದ ಉದ್ದೇಶವೇ ಸ್ಪಷ್ಟವಾಗಿರಲಿಲ್ಲ. ಪ್ರದರ್ಶಿತವಾಗುವ ಸಿನೆಮಗಳ ಕುರಿತು ಮಾತನಾಡುವುದಕ್ಕೆ ಆಗಮಿಸಲಿದ್ದ ಸಂಪನ್ಮೂಲ ವ್ಯಕ್ತಿಗಳ ಹೆಸರಿನ ಪ್ರಭಾವದಿಂದಾಗಿಯೋ ಅಥವಾ ಸಿನೆಮ ನಿರ್ಮಾಣದಲ್ಲಿ ತೊಡಗಿಕೊಳ್ಳಬೇಕು, ಅದಕ್ಕೆ ಸಹಾಯವಾಗುವ ತರಬೇತಿ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಅವರು ಇದ್ದಂತೆ ಕಾಣುತ್ತಿತ್ತು. ಶಿಬಿರದ ನಂತರದ ಘಟ್ಟದಲ್ಲಿ ಆ ದಿನಗಳು ಚಿತ್ರದ ನಿರ್ದೇಶಕ ಕೆ.ಎಂ.ಚೈತನ್ಯ ಗುರುತಿಸಿದ ಹಾಗೆ, "ದೃಶ್ಯ ಸಂಸ್ಕೃತಿಯ ಪರಿಚಯ ಏಳನೆಯ ತರಗತಿಯಿಂದ ಪ್ರಾರಂಭವಾಗಬೇಕಾದ ಕೆಲಸ. ಈಗಾಗಲೇ ತಡವಾಗಿದೆ. ಇನ್ನು ತಡಮಾಡಬಾರದು."

ಮುಂದೆ ಓದಿ >>

ಸಿನಿಮಾ ಗ್ರಹಿಕೆಯ ಕುರಿತು

ಬರವಣಿಗೆ ನಾನು ಇತ್ತೀಚೆಗೆ ಅಂದರೆ ಸುಮಾರು ನಾಲ್ಕು ವರ್ಷದಿಂದ ಕಂಡುಕೊಂಡ ಅಭಿವ್ಯಕ್ತಿ ಮಾರ್ಗ. ಬರವಣಿಗೆಯನ್ನು ಪ್ರಾರಂಭಿಸಿದಾಗ ನನ್ನಲ್ಲಿ ಬದಲಾಗಿದ್ದು ನಾನು ಓದುತ್ತಿದ್ದ ರೀತಿ. ವಿಷಯ, ವಸ್ತು ನಿಷ್ಠತೆ, ಬರಹದಲ್ಲಿ ವ್ಯಕ್ತವಾಗುತ್ತಿರುವ ಭಾವ ಇವೆಲ್ಲದರ ಸೂಕ್ಷ್ಮ ಒಳಹುಗಳು ಅರಿವಿಗೆ ಬರ ತೊಡಗಿದ್ದು ಬರವಣಿಗೆಯಿಂದ ನನಗಾದ ಅತಿ ಹೆಚ್ಚಿನ ಉಪಯೋಗವೆಂದೇ ಹೇಳಬೇಕು. ಬರವಣಿಗೆಗೆ ತೊಡಗಲು ಮುಂಚೆ ಇದ್ದ ಮುಗ್ಧತೆ ಈಗಿಲ್ಲ ಅಥವಾ ಬರವಣಿಗೆಗೆ ತೊಡಗಿದ ಮೇಲೆ ಓದು ಹೆಚ್ಚು ಗಂಭೀರವಾಗಿದೆ ಎನ್ನಬಹುದು. ಬದಲಾದ ನನ್ನ ಓದಿನ ರೀತಿ ನಾನು ಓದುತ್ತಿದ್ದ ವಿಷಯಗಳ ಬದಲಾವಣೆಗೂ ಕಾರಣವಾಗಿದೆ. ಇದನ್ನು ಏಕೆ ಹೇಳುತ್ತಿದ್ದೇನೆಂದರೆ, ಸಿನಿಮಾ ನೋಡುವ ನನ್ನ ಇತ್ತೀಚಿನ ಹವ್ಯಾಸದಲ್ಲೂ ಕೂಡ ನಾನು ಈ ತರಹದ್ದೆ ಅನುಭವವನ್ನು ಪಡೆಯತೊಡಗಿದ್ದೇನೆ. ಸಿನಿಮಾಗಳನ್ನು ವೀಕ್ಷಿಸುವ, ಅದನ್ನು ಆಳವಾಗಿ ಗ್ರಹಿಸುವ, ಕಲಿಕೆಯ ಮಾರ್ಗವನ್ನಾಗಿಸುವ ಬಗ್ಗೆ ಇತ್ತೀಚಿನ ಪರಿಚಯಗಳಿಂದ ಹೆಚ್ಚಿಗೆ ಕೇಳುತ್ತಿರುವೆನಾದ್ದರಿಂದ ಬೇರೆ ಬೇರೆ ಭಾಷೆಯ, ದೇಶದ ಹಲವು ಸಿನಿಮಾಗಳ ನೋಡುವಿಕೆಗೆ ಉತ್ತೇಜಿಸುತ್ತಲಿದೆ. ಬರೆದು ಮುಗಿದ ಮೇಲೆ ಲೇಖಕರನ್ನು ಹೊರಗಿಟ್ಟು ಹೇಗೆ ವಿಶಿಷ್ಟ ಬರಹವೊಂದು ತನ್ನದೇ ಆದ ವಿವಿಧ ಅರ್ಥಗಳನ್ನು ಪಡೆದುಕೊಳ್ಳುತ್ತದೋ, ಸಿನಿಮೀಯ ಪರಿಭಾಷೆಯನ್ನು, ಒಳನೋಟಗಳನ್ನು, ಕಲ್ಪನೆಯನ್ನೂ ಒಳಗೊಂಡ ಸಿನಿಮಾ ಕೂಡ ಅಂತಹದ್ದೇ ಅನುಭವವನ್ನು ಕೊಡತೊಡಗುತ್ತದೆ ಎಂಬ ಮಾತಿನ ಅನುಭವವಾಗುತ್ತಿದೆ.

ಮುಂದೆ ಓದಿ >>

ಹದವಿತ್ತು, ಹರಿವಿತ್ತು, ಹರವಿತ್ತು ಭಾನುವಾರ. ಮುರಿದದ್ದು ಕಾಲ.

ಸಂವಾದ ಡಾಟ್ ಕಾಂ ಕ್ಲಾಸಿಕ್ ಚಿತ್ರ ಪ್ರದರ್ಶನ ಸರಣಿಯ ಮೊದಲ ಕಂತು:‘ಬರನ್’ ಇರಾನಿ ಚಿತ್ರ ಪ್ರದರ್ಶನ ಮತ್ತು ಸಂವಾದ, samvaada.com, krish joshi, vijay hanakere, kannada art films, kannada film news, kannada news ‘ಬರನ್’ ಇರಾನಿ ಚಿತ್ರ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮ ನಿನ್ನೆ ನಡೆಯಿತು. ಚಿತ್ರ ನೋಡಿದ ಶೇ ೫೦ರಷ್ಟು ಮಂದಿ ಚರ್ಚೆಯಲ್ಲಿದ್ದರು. ಶೇ ೨೫ರಷ್ಟು ಮಂದಿ ಚರ್ಚೆಯಲ್ಲಿ ಭಾಗವಹಿಸಿದರು. ಶೇ ೧೦ರಷ್ಟು ಮಂದಿ ತುರುಸಿನ ವಾದ ವಾಗ್ವಾಗ ಚರ್ಚೆ ಏನು ಅಂದುಕೊಂಡರೂ ಆದೀತು, ಅದನ್ನು ಮಾಡಿದರು. ಕೆಲವರು ಆಕಳಿಸಿದರು, ತೂಕಡಿಸಿದರು. ಎಲ್ಲವೂ ಅಹಿಂಸಾ ಪ್ರತಿಭಟನೆಯ ಇನ್ನೊಂದು ಬಗೆಯೆಂದು ಚರ್ಚೆ ನಿಭಾಯಿಸಲು ಹೋದ ನನಗೆ ಅರ್ಥವಾಗಲು ತಡವಾಯಿತು. ಸೆಕೆ, ಬಿಸಿ ಕಾಫಿ, ಬಿಸಿ ಮಾತು ಕಾವೋ ಕಾವು. ಹದವಿತ್ತು, ಹರಿವಿತ್ತು, ಹರವಿತ್ತು ಭಾನುವಾರ. ಮುರಿದದ್ದು ಕಾಲ. ಚರ್ಚೆಯಲ್ಲಿ ಬಹಳ ಸಕ್ರಿಯವಾಗಿ ಪಾಲ್ಗೊಂಡ ಚಿತ್ರಕರ್ಮಿ ಗೆಳೆಯರಾದ ಕ್ರಿಶ್ ಜೋಶಿ, ವಿಜಯ್ ಹನಕೆರೆ ಇಬ್ಬರಿಗೂ ನಮಸ್ಕಾರ. ಇವರು ಜಗತ್ತಿನ ಸಿನಿಮಾಗಳ ಕಡೆಗೆ ನಮ್ಮನ್ನು ಸೆಳೆಯುವ ಬೆಳಕಿಂಡಿಯಂತೆ ಕಂಡರು.

ಮುಂದೆ ಓದಿ >>

ವಕೀಲರು, ಪತ್ರಕರ್ತರು, ಪೊಲೀಸರು ಮತ್ತು ಅಕಿರಾ ಕೊರೊಸಾವಾನ ರಶೋಮನ್

ಕುರೋಸೋವಾನ ರಶೋಮನ್ ಸಿನೆಮಾ ವಿಮರ್ಶೆ, Rashomon film review ಸೆವೆನ್ ಸಮುರಾಯ್, ಇಕಿರು, ಲೋಯರ್ ಡೆಪ್ತ್ಸ್, ಯೋಜಿಂಬೋ, ಡ್ರಂಕನ್ ಏಂಜೆಲ್, ರೆಡ್ ಬೇರ್ಡ್, ಥ್ರೋನ್ ಆಫ್ ಬ್ಲಡ್, ಡ್ರೀಮ್ಸ್. ಕಳೆದ ಮಾರ್ಚ್ ೨ ರಂದು ಬೆಂಗಳೂರಿನಲ್ಲಿ ನಡೆದ ವಕೀಲರು - ಪತ್ರಕರ್ತರು - ಪೊಲೀಸರ ನಡುವಿನ ವೃತ್ತಿಗಲಭೆ ನಿಧಾನಕ್ಕೆ ಜನಮಾನಸದಿಂದ ದೂರಾಗತೊಡಗಿದೆ. ಅಂದು ಮೂರೂ ಕಡೆಯವರಿಗೆ ಉಂಟಾದ ದೇಹದ ಮೇಲಿನ ಗಾಯಗಳೂ ವಾಸಿಯಾಗುತ್ತಿವೆ.ತಲೆಗೆ ಹಾಕಿದ್ದ ಹೊಲಿಗೆಗಳೂ ಬಿಚ್ಚಲಾಗಿದೆ. ಆದರೆ ಅಂದು ಉಂಟಾದ ಮಾನಸಿಕ ಗಾಯಗಳು ಇನ್ನು ಹತ್ತು ವರ್ಷಗಳಾದರೂ ವಾಸಿಯಾಗಲಾರವು. ಸಮಾಜದಲ್ಲಿ ಅತ್ಯಂತ ಜವಾಬ್ದಾರಿ ಹೊಂದಿದ್ದ ಈ ವೃತ್ತಿಪರರ ನಡುವಿನ ಕಂದಕ ದಿನೇ ದಿನೇ ಬೆಳೆಯುತ್ತಲೇ ಹೋಗುತ್ತಿದೆ. ಅಂದಿನ ಘಟನೆ ಹೇಗೆ ನಡೆಯಿತೆಂದು ನೀವು ಪತ್ರಕರ್ತರಿಗೆ ಕೇಳಿದರೆ ಅವರು ಒಂದು ರೀತಿ ಮಾಧ್ಯಮಗಳ ಮೂಲಕ ಭಿತ್ತರಿಸಿದ್ದಾರೆ. ವಕೀಲರು ತಮ್ಮದೇ ರೀತಿ ಹೇಳುವ ಪ್ರಯತ್ನ ನಡೆಸಿದ್ದಾರೆ.ಪೊಲೀಸರು ಕೂಡಾ ಮತ್ತೊಂದು ಬಗೆಯಲ್ಲಿ ಹೇಳುತ್ತಾರೆ. ಈ ಹೊತ್ತಿನಲ್ಲಿ ನನಗೆ ಮತ್ತೊಮ್ಮೆ ಕಾಡಿದ್ದು ಜಗತ್ಪ್ರಸಿದ್ಧ ನಿರ್ದೇಶಕ ಅಕಿರಾ ಕೊರೊಸಾವಾನ ರಶೋಮನ್ (1959ರಲ್ಲಿ ನಿರ್ಮಿಸಿದ್ದು) ಎಂಬ ಅದ್ಭುತ ಸಿನೆಮಾ. ಈ ಸಿನೆಮಾ ನೋಡಿರುವವರಿಗೆಲ್ಲಾ ನನ್ನ ಮಾತು ಅರ್ಥವಾಗಿರುತ್ತದೆ.

ಮುಂದೆ ಓದಿ >>

ಸಿದ್ಲಿಂಗು

ತನ್ನ ಪೋಲಿ ಹುಡುಗಾಟಿಕೆಯ ಪ್ರೋಮೋಗಳಿಂದಲೇ ಜನಪ್ರಿಯತೆ ಗಳಿಸಿದ್ದ ತೀವ್ರ ನಿರೀಕ್ಷೆಯ ಚಿತ್ರ ಸಿದ್ಲಿಂಗು ಚಿತ್ರದ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬರುತ್ತಿವೆ. Stereotype ಸಿನಿಮಾಗಳಿಂದ ಬೇಸತ್ತ ಜನರಿಗೆ ಒಂದು ಸಾಧಾರಣ ಕತೆಯನ್ನು ವಿಭಿನ್ನವಾಗಿ ಹೇಳಲಾಗಿರುವ ಕನ್ನಡದ ಚಿತ್ರಗಳಲ್ಲೊಂದು. ಕತೆಯ ಮಾದರಿಯಿಂದ ಹಿಡಿದು, ನಿರೂಪಣೆ, ಸಂಭಾಷಣೆ ಹಾಗು ನಟನೆಯಲ್ಲೂ ಕೂಡ ಹೊಸತನ್ನು ಹೊತ್ತು ತಂದಿರುವಂತಹ ಚಿತ್ರವೂ ಹೌದು. ಚಿತ್ರದ ಕತೆಯನ್ನು ನಾಯಕ narrate ಮಾಡುತ್ತ ಹೋಗುತ್ತಾನೆ, ಆತ ಹುಟ್ಟಿದ್ದು, ಆತನ ಅಪ್ಪ ಚಿಕ್ಕಮ್ಮ, ಸ್ಕೂಲು, ಸ್ಕೂಲಿನ ಗೆಳತಿ, ಕಾರಿನ ಬಗ್ಗೆ ಆತನಿಗೆ ವ್ಯಾಮೋಹ ಬೆಳೆದು ಬಂದ ರೀತಿ. ಕಾರಿದ್ದದ್ದಕ್ಕೆ ಹತ್ತಿರವಾದ ಲೆಕ್ಚರರ್, ಸಲೀಸಾಗಿ ಎಂಬಂತೆ ಆಕೆಯೊಂದಿಗೆ ಕಾರಿನಲ್ಲೇ ನಡೆದು ಹೋಗುವ ದೈಹಿಕ ಸಂಪರ್ಕ, ಹಠಾತ್ತನೆ ಸತ್ತು ಹೋಗುವ ಅಪ್ಪ ಅಮ್ಮ, ಒಂಟಿಯಾಗಿ ಬೆಳೆಯುವ ಆತ, ಕಾರು ಕೊಳ್ಳಬೇಕೆಂಬ ಆತನ ಕನಸು, ಕಾರ್ ಮಾಲೀಕನ ಒಂದಷ್ಟು ಎಮೋಷನ್ಸು, ಬಡ್ಡಿಗೆ ದುಡ್ಡು ಕೊಡುವ ವ್ಯಾಪಾರಿ, ಅದರಿಂದ ಪರಿಚಯವಾಗುವ ನಾಯಕಿ, ಆಕೆಯೊಂದಿಗಿರುವ ಆಯಾ, ಧಿಡೀರ್ ಎಂದು ಮತ್ತೆ ಕಾಣಿಸಿಕೊಳ್ಳುವ ಲೆಕ್ಚರರ್ ’ತುರುವೇಕೆರೆ ಆಂಡಾಳಮ್ಮ’, ಆಕೆಯನ್ನು ನೋಡಿ ಕಾರಿನ ದಾಖಲೆಗಳನ್ನು ಕಳೆದುಕೊಳ್ಳುವ ನಾಯಕ, ಕಾರ್ ಮಾಲೀಕನ ಮಗನ ವಿಲನ್ ರೂಪದ ಎಂಟ್ರಿ, ಆತನಿಗೊಬ್ಬ ಇನ್ಸ್ ಪೆಕ್ಟರ್ ಶತ್ರು, ಇನ್ಸ್ ಪೆಕ್ಟರ್ ಗೆ ಹತ್ತಿರವಾಗುವ ಸಿದ್ಲಿಂಗು ಮತ್ತು ನಾಯಕಿ, ಕ್ಲೈಮ್ಯಾಕ್ಸ್ ನಲ್ಲಿ ವೈರಿ ನಾಶಕ್ಕಾಗಿ ಇನ್ಸ್ ಪೆಕ್ಟರ್ ಹಾಗು ಸಿದ್ಲಿಂಗು ಹೊಡೆದಾಡಬೇಕಾದರೆ, ಅಚಾತುರ್ಯದಿಂದ ಸತ್ತು ಹೋಗುವ ನಾಯಕಿ. ಕ್ಲೈಮ್ಯಾಕ್ಸ್ ಅನ್ನು ಪ್ರೇಕ್ಷಕರನ್ನು ದಿಗ್ಬ್ರಮಿಸಲೆಂದೇ ಮೂಡಿಸಿರುವುದು ತಿಳಿದರು ಇಡೀ ಕತೆ ಹಾಗು ಅದರ ರೀತಿ ಕ್ಲೈಮ್ಯಾಕ್ಸನ್ನು ಜಸ್ಟಿಫೈ ಮಾಡುವುದಿಲ್ಲ. ಹಾಗಾಗಿ ಅದು ಅಲ್ಟಿಮೇಟ್ ಶಾಕ್ ಎನಿಸದೆ ಅತೀ ಭಾವುಕವೂ ಎನಿಸದೆ ಪ್ರೇಕ್ಷಕರ ಮನಸ್ಸಿನಲ್ಲಿ ನಿಲ್ಲಲು ಸೋಲುತ್ತದೆ.

ಮುಂದೆ ಓದಿ >>

ನಾಟಕ ವಿಮರ್ಶೆ ‘ಪಿನಾಕಿನೀ ತೀರದಲ್ಲಿ’

ನಾಟಕ ವಿಮರ್ಶೆ ‘ಪಿನಾಕಿನೀ ತೀರದಲ್ಲಿ’ , ಸಮುದಾಯ ರಂಗ ಚಟುವಟಿಕೆ, ರವೀಂದ್ರ ಕಲಾಕ್ಷೇತ್ರ, ಉಷಾ ಕಟ್ಟೇಮನೆ, ಸಂವಾದ ಡಾಟ್ ಕಾಂ, samvaada.comಇತಿಹಾಸದ ಘಟನೆಯೊಂದನ್ನು ವರ್ತಮಾನದಲ್ಲಿ ನಿಂತು ನೋಡುವ ಪ್ರಯತ್ನವೇ ’ಪಿನಾಕಿನೀ ತೀರದಲ್ಲಿ’ ಈ ನಾಟಕವನ್ನು ಕೆ.ಜಿ.ಎಫ್ ಸಮುದಾಯ ಬುಧವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶಿಸಿತು.

ಅವಿಭಜಿತ ಕೋಲಾರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಉತ್ತರ ಪಿನಾಕಿನಿ ನದಿ ತೀರದಲ್ಲಿದೆ ವಿದುರಾಶ್ವತ್ಥ. ಮಹಾಭಾರತದ ವಿದುರನ ಹೆಸರಿನೊಂದಿಗೆ ತಳುಕು ಹಾಕಿಕೊಂದಿರುವ ಇಲ್ಲಿರುವ ಅರಳಿ ಮರದ ಕೆಳಗೆ ಸಾವಿರಾರು ನಾಗರ ಕಲ್ಲುಗಳಿವೆ. ಇದೊಂದು ಭಕ್ತರ ಆರಾಧನಾ ಕ್ಷೇತ್ರ. ಆದರೆ ಈ ಜಾಗ ಐತಿಹಾಸಿಕ ಘಟನೆಯೊಂದಕ್ಕೆ ಸಾಕ್ಷಿಯಾಗಿತ್ತು ಎಂಬುದು ಬಹಳ ಜನಕ್ಕೆ ಗೊತ್ತಿದ್ದಂತಿಲ್ಲ.

ಭಾರತದ ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ನಡೆದ ಧ್ವಜ ಸತ್ಯಾಗ್ರ್ಹ ಚಳುವಳಿ ಮತ್ತು ಅದರಲ್ಲಿ ಹುತಾತ್ಮರಾದವರ ಇತಿಹಾಸ ವಿದುರಾಶ್ವತ್ಥದೊಂದಿಗೆ ಸೇರಿಕೊಂಡಿದೆ. ಇದನ್ನು ದಕ್ಷಿಣದ ಜಲಿಯನ್ ವಾಲಾಬಾಗ್ ಎಂದು ಕರೆಯುತ್ತಾರೆ.

ಮುಂದೆ ಓದಿ >>

ಇನ್ನಷ್ಟು ಲೇಖನಗಳು